Friday, January 10, 2014

೩೭೦ ಪರಿಚ್ಛೇದ ರದ್ದುಗೊಳಿಸುವುದೇ ಸೂಕ್ತ.



ನರೇಂದ್ರ ಮೋದಿ ಇತ್ತೀಚೆಗೆ ಕಾಶ್ಮೀರಕ್ಕಾಗಿ ಇರುವ ಪರಿಚ್ಛೇದ ೩೭೦ರ ಕುರಿತು ಚರ್ಚಿಸಬೇಕೆಂದು ಹೇಳಿದ್ದರು.
೩೭೦ ಪರಿಚ್ಛೇದದ ದುಷ್ಪರಿಣಾಮಕ್ಕೆ ನೆಹರೂರವರೇ ಜವಾಬ್ದಾರರು. ಇದು ನಿಜವಾಗಿಯೂ ಕಾಶ್ಮೀರದ ಬಂಡುಕೋರರಿಗೆ ಕೊಡುವ ಅತ್ಯುನ್ನತ ಸೌಲಭ್ಯವಾಗಿದೆ. ಇದು ನೆಹರೂ ರೂಪಿಸಿದ ವಿಧಿಯಾಗಿದೆ. ಭಾರತಕ್ಕೆ ಒಳಪಡುವ ಸಂಸ್ಥಾನಗಳನ್ನು ಭಾರತಕ್ಕೆ ವಿಲೀನಗೊಳಿಸುವ ಜವಾಬ್ದಾರಿ ಸರ್ದಾರ್ ವಲ್ಲಭಾಯ್ ಪಟೇಲರ ಮೇಲಿತ್ತು. ಆಗ ಸರ್ದಾರ್ ನೆಹರೂರವರಲ್ಲಿ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕೇಳಿಕೊಂಡರು. ಬೇರೆ ಸಂಸ್ಥಾನಗಳು ತಕ್ಷಣ ವಿಲೀನವಾದವು. ಆದರೆವ ಅಲ್ಲಿನ ರಾಜಾ ಹರಿಸಿಂಗ್ ಮಾಡಿದ ಕೊಂಚ ಎಡವಟ್ಟಿನಿಂದ ಮತ್ತು ನೆಹರೂರವರ ಎಡವಟ್ಟಿನಿಂದ ಕಾಶ್ಮೀರ ಇಂದಿನವರೆಗೆ ಸಮಸ್ಯೆ ನೀಡುತ್ತಲೇ ಬಂದಿದೆ. ಲೊನೆಗೆ ಚೀನಾ ೩೬ ಸಾವಿರ ಮೈಲ ವಿಸ್ತೀರ್ಣದ ಭೂಭಾಗವನ್ನು ಸ್ವಾಧೀನಗೊಳಿಸಿತು.
ಪಾಕಿಸ್ತಾನ ಕಾಶ್ಮೀರಕ್ಕೆ ಚೀನಾವನ್ನು ಕಳುಹಿಸಿದ್ದಾಗ ರಾಜಾ ಹರಿಸಿಂಗ್‌ನು ಸೈನ್ಯ ಕಳುಹಿಸಲು ವಿನಂತಿಸುತ್ತಿದ್ದನು; ಆದರೆ ನೆಹರು ಬಾಯಿ ಮುಚ್ಚಿಕೊಂಡಿದ್ದರು. ಪಾಕಿಸ್ತಾನವು ಅರ್ಧ ಕಾಶ್ಮೀರವನ್ನು ವಶಪಡಿಸಿದ ನಂತರ ಸರದಾರ ಪಟೇಲರು ಸ್ವತಃ ಸೈನ್ಯ ಕಳುಹಿಸಿ ಪಾಕಿಸ್ತಾನದ ಸೈನ್ಯವನ್ನು ತಡೆದರು. ಆದ್ದರಿಂದ ಕಾಶ್ಮೀರ ಅರ್ಧ ವಾದರೂ ಉಳಿಯಿತು. ಆದರೆ ಪಾಲಿಸ್ತಾನಕ್ಕೆ ಸರಿಯಾದ ಉತ್ತರ ನೀಡಲು ಕಾಂಗ್ರೆಸ್ ಸರಕಾರಕ್ಕೆ ಮನಸ್ಸಾಗಲೇ ಇಲ್ಲ. ಆದರೆ ಮೋದಿ ಮಾತ್ರ ಪಾಕಿಸ್ತಾನಕ್ಕೆ ತಕ್ಕ ಉತ್ತರ ಮೀಡಬಲ್ಲವರಾಗಿರುವುದರಿಂದ ಅವರನ್ನು ಪ್ರಧಾನಿ ಮಾಡುವುದು ಅಗತ್ಯವಾಗಿದೆ.
ಗಡಿ ಸಮಸ್ಯೆ ಸಂಯುಕ್ತ ರಾಷ್ಟ್ರ ಸಂಘಕ್ಕೆ ಹೋದಾಗ ನೆಹರೂರವರು ಶೇಖ್ ಅಬ್ದುಲ್ಲಾ ಎಂಬವರನ್ನು ಕಳುಹಿಸಿದರು. ಆಗ ಅವರು ಕಾಧ್ಮೀರ ಭಾರತದ್ದೂ ಅಲ್ಲ, ಪಾಕಿಸ್ತಾನದ್ದೂ ಅಲ್ಲ ಎಂಬ ಹೇಳಿಕೆ ನೀಡಿದರು. ಇದರಿಂದಾಗಿಯೇ ಪಾಕ್ ಇದುವರೆಗೂ ತಮ್ಮದೆಂದು ಹೇಳಿಕೊಳ್ಳುತ್ತಿದೆ. ಇದು ನೆಹರೂ ಮಾಡಿದ ತಪ್ಪಾಗಿದ್ದು, ಈ ತಪ್ಪನ್ನು ಕೇಂದ್ರದಲ್ಲಿ ಇದುವರೆಗೆ ಅಧಿಕಾರದಲ್ಲಿ ಕೂತ ಕಾಮಗ್ರೆಸ್ ಸರಕಾರ ಬಗೆಹರಿಸಲು ಹೋಗಿಲ್ಲ.
ನಂತರ ಲಾಧ್ಮೀರದಲ್ಲಿ ೩೭೦ನೇ  ಪರಿಚ್ಛೇದ ಚಾಲ್ತಿಗೆ ಬಂದಿತು. ಇದರಿಂದಾಗಿ ಸಾವಿರಾರು ಕಾಶ್ಮೀರಿ ಯುವತಿಯರಿಗೆ ವರಾನ್ವೇ ವರಾನ್ವೇಶಣೆಗೆ ಅಡ್ಡಿಯಾಗುತ್ತಿದೆ. ಕಾಶ್ಮೀರಿ ಯುವತಿ ಭಾರತದ ಮುಸಲ್ಮಾನನೊಂದಿಗೆ ವಿವಾಹ ವಾಗುವಂತಿಲ್ಲ, ಆದರೆ ಕಾಶ್ಮೀರಿ ಯುವಕರು ಯಾರೊಂದಿಗೂ ವಿವಾಹವಾಗ ಬಹುದು. ಇಂತಹ ಭೇದ ಭಾವವೇಕೇ? ಈ ಬಗ್ಗೆ ಸಮಾನತೆಯ ಬಗ್ಗೆ ಕೂಗು ಹಾಕುವ ಪ್ರಗತಿಪರರು, ಮಹಿಳಾವಾದಿಗಳು ಯಾಕೆ ಬೊಬ್ಬೆ ಹಾಕಲಿಲ್ಲ?
೩೭೦ರ ಪರಿಚ್ಛೇದದ ದುಷ್ಪರಿಣಾಮಗಳು:
ಕಾಶ್ಮೀರದಲ್ಲಿ ಭಾರತೀಯರಿಗೆ ವಾಸಿಸುವಂತಿಲ್ಲ. ಇದ್ದರೆ ಅತಿಥಿಗಳಂತೆ ಸ್ವಲ್ಪದಿನ ಇದ್ದು ಬರಬಹುದು. ರಾಷ್ಟ್ರಪತಿಗೂ ಅಲ್ಲಿ ನೆಲೆಸಲು ಸಾಧ್ಯವಿಲ್ಲ. ಅಲ್ಲಿ ಆಲಿ ಇಂಡಿಯಾ ರೇಡಿಯೋ ಇಲ್ಲ. ಅಲ್ಲಿ ರೇಡಿಯೋ ಕಾಶ್ಮೀರವಿದೆ. ಅಂಬೇಡ್ಕರ್ ಸಂವಿಧಾನವನ್ನು ಅನ್ವಯಿಸುವಾಗ ನೆಹರು ಅದನ್ನು ಕಾಶ್ಮೀರದಿಂದ ದೂರವಿಟ್ಟರು. ಸಂವಿಧಾನದಲ್ಲಿನ ಯಾವುದೇ ಪರಿಚ್ಛೇದವೂ ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ ಎಂದರು. ಕಾಶ್ಮೀರದ ಮುಖ್ಯಮಂತ್ರಿಗೆ ಭಾರತದ ಪ್ರಧಾನಿಗಿರುವ ಅಧಿಕಾರ ಮರ್ಯಾದೆ ಇದೆ. ಇದರಿಂದಾಗಿ ಒಂದು ದೇಶದಲ್ಲಿ ಎರಡು ಪ್ರಧಾನಿಗಳಂತೆ. ಆದುದರಿಂದ ಈ ದೇಶದ್ರೋಹಿ ೩೭೦ ಪರಿಚ್ಛೇದವನ್ನು ರದ್ದುಪಡಿಸಿದಾಲೇ ಭಾರತ ನಿಜವಾಗಿಯೂ ಸ್ವತಂತ್ರಯವಾಗಲಿದೆ.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಕಾಶ್ಮೀರಕ್ಕೆ ಅನ್ವಯವಾಗುವ ೩೭೦ನೇ ಪರಿಚ್ಛೇದವನ್ನು ರದ್ದುಗೊಳಿಸಬೇಕು ಎಂಬ ಹೇಳಿಕೆಯನ್ನು ನೀಡಿದರು. ಆದರೆ ಆ ಹೇಳಿಕೆ ಹೊರಬಿದ್ದ ತಕ್ಷಣ ಮೋದಿಯವರನ್ನು ದೇಶದ್ರೋಹಿಯಂತೆ ಚಿತ್ರಿಸಲಾಯ್ತು. ಕಂಗ್ರೆಸ್ ಕೃಪಾಪೋಷಿತ ಮಾಧ್ಯಮ,ಗಳು ಮೋದಿಯವರ ಮೇಲೆ ಛೂ ಬಿದ್ದವು. ೩೭೦ನೇ ಪರಿಚ್ಛೇದದ ದುಷ್ಪರಿಣಾಮದ ಬಗ್ಗೆ ಯಾವ ಮಾಧ್ಯಮಗಳೂ ಜನರಿಗೆ ತಿಳುವಳಿಕೆಯನ್ನು ನೀಡಲಿಲ್ಲ.
ಈ ಕಾಶ್ಮೀರ ಸಮಸ್ಯೆ ಬಗೆಹರಿದಿದ್ದರೆ ಲಕ್ಷಾಂತರ ಅಮಾಯಕ ಜನರು ಸಾವಿಗೀಡಾಗಬೇಕಾಗುತ್ತಿರಲಿಲ್ಲ. ಕಾಶ್ಮೀರಿ ಪಂಡಿತರು ದೇಶಬಿಟ್ಟು ಹೋಗಿ ಬೀದಿಬದಿಗಳಲ್ಲಿ ಚಪ್ಪಲಿ ಹೊಲಿಯುವ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಕಾಶ್ಮೀರದ ಮುಖ್ಯಮಂತ್ರಿ ಭಾರತ ದೇಶದ ವಿರುದ್ಧ ಹೇಳಿಕೆಯನ್ನು ನೀಡಬೇಕಾಗಿರಲಿಲ್ಲ. ಭಾರತದ ಹೆಮ್ಮೆಯ ಲಕ್ಷಾಂತರ ಸೈನಿಕರು ಪ್ರಾಣ ತ್ಯಾಗ ಮಾಡಬೇಕಾಗಿರಲಿಲ್ಲ.    ಯುದ್ಧಕ್ಕಾಗಿ ಭಾರತ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಬೇಕಾಗುತ್ತಿರಲಿಲ್ಲ. ಮುಖ್ಯವಾಗಿ ಭಯೋತ್ಪಾದನೆ ಈ ಪರಿ ಬೆಳೆಯಲೂ ಸಾಧ್ಯವಾಗುತ್ತಿರಲಿಲ್ಲ.
ನರೇಂದ್ರ ಮೋದಿ ಪ್ರಧಾನಿಯಾದರೆ ಕಾಂಗ್ರೆಸ್ ನಾಯಕರು ಜೈಲು ಪಾಲಾಗುವುದು ಸ್ಪಷ್ಟ. ಸಿಖ್ಖರ ಸಾವಿಗೆ ಕಾರಣವಾದ ಕಾಂಗ್ರೆಸ್ ಅದರ ಅಧಿನಾಯಕಿ ಅಂತರರಾಷ್ಟ್ರೀಯ ಕಟಕಟೆಯಲ್ಲಿ ನಿಲ್ಲಬೇಕಾದ ಪ್ರಮೇಯ ಒದಗಿ ಬರುತ್ತದೆ. ಭೋಪಾಲ್ ಅನಿಲ ದುರಂತ ಮತ್ತೆ ಜಿಗಿತುಕೊಂಡು ಅದರ ಹಿಂದಿರುವ ಕರಾಳ ಮುಖಗಳು ಜೈಲುಪಾಲಾಗುವುದು ಖಂಡಿತ. ಭೋಪೋರ್ಸ್ ಹಗರಣ ಮೇಲೆ ಬೀಳುತ್ತದೆ. ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಕೋಟಿಗಟ್ಟಲೆ ಜನರ ಸಾವಿಗೆ ಕಾರಣವಾದ ಕಾಂಗ್ರೆಸ್ ಮೋದಿ ಪ್ರಧಾನಿಯಾದರೆ ಖಂಡಿತಾ ಮೂಲೋತ್ಪಾಟನೆಗೊಳ್ಳುತ್ತದೆ.
ಕಾಂಗ್ರೆಸ್ ಈಗ ನಡುಕವಾಗಿದ್ದು ಮೋದಿಯವರನ್ನು ಸಾವಿನ ವ್ಯಾಪಾರಿ ಎಂದು ಜರೆಯುತ್ತಿದೆ. ಅವರ ಮೇಲೆ ಒಂದಲ್ಲಾ ಒಂದು ಕೇಸ್ ಜಡಿಯುತ್ತದೆ. ಅವರನ್ನು ಪ್ರಧಾನಿಯಾಗದಂತೆ ಶತಾಯಗತಾಯ ಪ್ರಯತ್ನಿಸುತ್ತಿದೆ. ನಮಗೆ ಇರುವುದು ಕಡೆಯ ಅವಕಾಶ. ಇಂದು ನಾವುಮೋದಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡದಿದ್ದರೆ ನಾವು ಮತ್ತೆ ಸಮಸ್ಯೆಯಿಂದ ಬಳಲಬೇಕಾಗುತ್ತದೆ.
ಈ ಎಲ್ಲಾ ಅಂಶಗಳೆನ್ನು ಗಮನಿಸಿದಾಗ ಕಾಶ್ಮೀರ ಸಮಸ್ಯೆ ದೇಶದ ಅಭಿವೃದ್ಧಿಯಲ್ಲಿ ತೊಡಕಾಗಿರುವುದು ಗಮನಕ್ಕೆ ಬರುತ್ತದೆ. ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬಲ್ಲ ಮೋದಿಯವರನ್ನು ನಾವು ಪ್ರಧಾನಿಯನ್ನಾಗಿಸಬೇಕು.

No comments:

Post a Comment